In This Village The Mysuru Wodeyar Kingdom Has Been Established |

#hadinaru #nanjangudu #mysuru #mustvisitinnanjangud #mustvisitplacenearmysuru #historyofkarnataka #historicalplacesinkarnataka #historicalplacesinnanjangud #ಹದಿನಾರು #ನಂಜನಗೂಡು #ಕರ್ನಾಟಕದಇತಿಹಾಸ #ಮೈಸೂರುಸಂಸ್ಥಾನಸ್ಥಾಪನೆಯಾದಹಳ್ಳಿ
ಕರ್ನಾಟಕದ ಹೆಮ್ಮೆಯ ಸಂಸ್ಥಾನಗಳಾದ ಬನವಾಸಿಯ ಕದಂಬರು, ತಲಕಾಡಿನ ಗಂಗರು, ಬಾದಾಮಿಯ ಚಾಲುಕ್ಯರು, ಮಾನ್ಯಖೇಡಿನ ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ದ್ವಾರಸಮುದ್ರದ ಹೊಯ್ಸಳರು, ಕಲ್ಯಾಣದ ಕಲಚೂರಿಗಳು, ಹಂಪೆಯ ವಿಜಯನಗರದ ಅರಸರು, ಬಹಮನಿ ಸುಲ್ತಾನರ ನಂತರ ಬಂದದ್ದೆ ನಮ್ಮ ಮೈಸೂರು ಸಂಸ್ಥಾನ.
ಆದರೆ ಇದು ಎಲ್ಲಿ ಉಗಮವಾಯಿತು ಎಂಬ ಕುತೂಹಲ ಇರಬೇಕಲ್ವ ಬನ್ನಿ ಇಂದಿನ ವೀಡಿಯೋದಲ್ಲಿ ತಿಳಿದುಕೊಳ್ಳೋಣ.
ಅದು ಕ್ರಿ.ಶ ೧೩೯೯ ಕಾಲ ನಮ್ಮ ಮೈಸೂರು ಭಾಗ ವಿಜಯನಗರ ಸಾಮ್ರಾಜ್ಯದ ಆಡಳಿತಕ್ಕೆ ಒಳಪಟ್ಟಿತು. ಸ್ಥಳೀಯ ಮಾಂಡಳಿಕನಾದ ಚಾಮರಾಜ ವಿಜಯನಗರ ಅರಸರಿಗೆ ಬದ್ಧವಾಗಿ ಆಳ್ವಿಕೆಯನ್ನು ಮಾಡುತ್ತಿರುತ್ತಾರೆ. ಸ್ವಲ್ಪ ದಿನಗಳ ನಂತರ ಆರೋಗ್ಯ ಸಮಸ್ಯೆಯಿಂದ ಮರಣ ಹೊಂದಿದಾಗ ಚಾಮರಾಜ ಅವರ ಹೆಂಡತಿ ದೇವಾಜಮ್ಮ ಹಾಗೂ ಮಗಳಾದ ಚಿಕ್ಕದೇವರಸಿ ಪರಿಸ್ಥಿತಿ ಬಿಗಡಾಯಿಸಿತು.
ಕಾರಣ ಕಾರುಗಳ್ಳಿ ಅಥವಾ ಕಾರ್ಗಳ್ಳಿಯ ಪಾಳೆಯಗಾರ ಮಾರನಾಯಕ ಹದಿನಾರು ಪಟ್ಟಣವನ್ನು ವಶಪಡಿಸಿಕೊಂಡು ದೇವಾಜಮ್ಮ ಅವರಿಗೆ ಮಗಳನ್ನು ಕೊಟ್ಟು ಮದುವೆ ಮಾಡಿಕೊಡಬೇಕು ಎಂದು ಒತ್ತಡ ಹೇರುತ್ತಾನೆ. ಈ ಸಮಸ್ಯೆಯನ್ನು ನಿವಾರಿಸಲು ತಾಯಿ ಚಾಮುಂಡೇಶ್ವರಿ ಮೊರೆ ಹೋಗುತ್ತಾರೆ. ನಿನ್ನ ಸಮಸ್ಯೆ ಆದಷ್ಟು ಬೇಗ ಬಗೆಹರಿಯುತ್ತದೆ ಎಂಬ ಸೂಚನೆ ಚಾಮುಂಡೇಶ್ವರಿ ನೀಡುತ್ತಾರೆ.
ಅದೇ ಸಮಯದಲ್ಲಿ ದ್ವಾರಕೆಯಿಂದ ಇಬ್ಬರು ಸಹೋದರರು ಮೈಸೂರು ಭಾಗಕ್ಕೆ ಬರುತ್ತಾರೆ. ಸ್ಥಳೀಯ ಜನರಿಂದ ರಾಣಿ ದೇವಾಜಮ್ಮ ಅವರ ಸಮಸ್ಯೆಯನ್ನು ತಿಳಿದುಕೊಳ್ಳುತ್ತಾರೆ. ಆ ಇಬ್ಬರು ಸಹೋದರೇ ಯದುರಾಯ ಮತ್ತು ಕೃಷ್ಣರಾಯ. ಮಾರನಾಯಕನನ್ನು ಯುದ್ಧದಲ್ಲಿ ಸಂಹಾರ ಮಾಡುತ್ತಾರೆ. ಇದಕ್ಕೆ ಪ್ರತಿಯಾಗಿ ದೇವಾಜಮ್ಮ ಅವರು ತಮ್ಮ ಮಗಳಾದ ಚಿಕ್ಕದೇವರಸಿಯನ್ನು ಯದುರಾಯನೊಂದಿಗೆ ಮದುವೆ ಮಾಡಿಸಿ ಒಡೆಯ ಎಂಬ ಬಿರುದು ನೀಡುತ್ತಾರೆ.
ಆಗ ೩೨ ಹಳ್ಳಿಗಳೊಂದಿಗೆ ಪ್ರಾರಂಭವಾಗಿದ್ದೇ ಮೈಸೂರು ಸಂಸ್ಥಾನ. ತಾಳಿಕೋಟಿ ಯುದ್ಧದ ನಂತರ ವಿಜಯನಗರ ಸಾಮ್ರಾಜ್ಯ ಪತನ ಸಾಮಂತ ರಾಜ್ಯಗಳು ಸ್ವತಂತ್ರ ಆಡಳಿತವನ್ನು ಮಾಡಲು ಅವಕಾಶ ಮಾಡಿಕೊಡುತ್ತದೆ. ಕ್ರಿ.ಶ ೧೬೧೦ರಲ್ಲಿ ರಾಜ ಒಡೆಯರ್ ಅವರ ಕಾಲದಲ್ಲಿ ಮೈಸೂರು ಸಂಸ್ಥಾನ ಪೂರ್ಣ ಪ್ರಮಾಣದ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಲು ಸಹಾಯ ಮಾಡುತ್ತಾರೆ. ೫೪೮ ವರ್ಷಗಳ ಕಾಲ ೨೫ ಮಹಾರಾಜರು ಆಳ್ವಿಕೆಯನ್ನು ಮಾಡಿದ್ದಾರೆ.
Credits:-
Images:- AI generated (Queen & her daughter, Military Commander, Two Young Prince)
Google - Mysuru Palace, Nalwadi Krishnaraja Wodeyar.
My Own Collection.
Videos:- My Own Collection.
Music Credits:-
KZread Audio Library
Follow me on Social Media:-
Facebook:- / rakesh.r.kumar
Instagram :- / rakesh_r_kumar

Пікірлер: 12

  • @mylocalyathra9398
    @mylocalyathra9398Ай бұрын

    Beautiful place 👌👍

  • @RRKSTRAVELISTRY

    @RRKSTRAVELISTRY

    Ай бұрын

    Thank you sir 🤗👍☺

  • @vidyashree8771
    @vidyashree8771Ай бұрын

    Super

  • @RRKSTRAVELISTRY

    @RRKSTRAVELISTRY

    Ай бұрын

    Thank you 🤗☺

  • @padmaanju1174
    @padmaanju1174Ай бұрын

    Of hadinaru

  • @RRKSTRAVELISTRY

    @RRKSTRAVELISTRY

    Ай бұрын

    Super

  • @padmaanju1174
    @padmaanju1174Ай бұрын

    Good morning sir The temple priest is our Tenant now.

  • @RRKSTRAVELISTRY

    @RRKSTRAVELISTRY

    Ай бұрын

    Oh is it super mam can you ask is there any other old temples in Hadinaru so that I can cover in my KZread channel?

  • @thimmareddys7561

    @thimmareddys7561

    18 күн бұрын

    ಹದಿನಾರು ಗ್ರಾಮ ಈಗ ಯಾವ ತಾಲೂಕು ನಲ್ಲಿ ಇದೆ ಮೈಸೂರ್ ಗೆ ಎಷ್ಟು ದೂರ ಇದೆ

  • @RRKSTRAVELISTRY

    @RRKSTRAVELISTRY

    9 күн бұрын

    @thimmareddys7561 ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನಲ್ಲಿದೆ ಸರ್. ಮೈಸೂರಿನಿಂದ ೨೪ ಕಿಮೀ ಹಾಗೂ ನಂಜನಗೂಡಿನಿಂದ ೧೫ ಕಿಮೀ ದೂರದಲ್ಲಿದೆ ಹದಿನಾರು ಗ್ರಾಮ

Келесі