Irabeku iruvante ( ಇರಬೇಕು ಇರುವಂತೆ)|DR H S VENKATESH MURTHY|RAGHAVENDRA BEEJADI
Музыка
Lyrics:- Dr H S Venkateshmurthy
Music:- Raghavendra beejadi
Instrumentation:- @SameerRao
singer :- Raghavendra beejadi
we use some images from Google.. our humble pranamas to all the artists..
ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ
ಮಳೆ ಸುರಿಸಿ ಹಗುರಾದ ಮುಗಿಲಿನಂತೆ||ಪ||
ತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿ
ಬೆಳಕಿನುಂಡೆಯ ಬಾನಿಗುರುಳು ಬಿಟ್ಟು
ಹೇಗೆ ಮರೆಯಾಗುವುದೊ ನಿರ್ಧನಿಕ ನಟ್ಟಿರುಳು
ಹಾಗೆ ಬಾಳಿಸು ಗುರುವೆ ಕರುಣೆಯಿಟ್ಟು||
ತಾನು ಬಿಸಿಲಲಿ ನಿಂತು ತನ್ನ ಬಳಿ ಬರುವವಗೆ
ತಣ್ಣಗಿನ ಆಸರೆಯ ನೆರಳ ಕೊಟ್ಟು
ಹೇಗೆ ಗೆಲುವಾಗುವುದೋ ಹಸಿರೆಲೆಯ ಹೊಂಗೆ ಮರ
ಹಾಗೆ ಬಾಳಿಸು ಗುರುವೆ ಪ್ರೀತಿಯಿಟ್ಟು||೧||
ತಾನು ಕೆಸರಲಿ ಕುಸಿಯುತ್ತಿದ್ದರೂ ತಾವರೆಯು
ಮರಿದುಂಬಿಗಳ ಪೊರೆವ ತೊಟ್ಟಿಲಾಗಿ
ಹೇಗೆ ತಾಯ್ತನವನ್ನು ಪ್ರೀತಿಯಲಿ ಮೆರೆಯುವುದೋ
ಹಾಗೆ ಬಾಳಿಸು ಗುರುವೆ ಕರುಣೆಯಿಟ್ಟು||
ದಾರಿಯುದ್ದಕೂ ಪೈರು ನಗುವಂತೆ ನೀರುಣಿಸಿ
ಹಾಲುತೆನೆಯಲಿ ಅಮೃತ ತುಂಬಿ ನದಿಯು
ಹೇಗೆ ದೂರದ ನೀಲಿಯಲ್ಲಿ ಕೊನೆಗೊಳ್ಳುವುದೋ
ಹಾಗೆ ಕೊನೆಗಾಣಿಸು ಕೃಪೆಯನಿಟ್ಟು||೨||
ರಚನೆ ಎಚ್ಚೆಸ್ವಿ
ಸಂಗೀತ ರಾಘವೇಂದ್ರ ಬೀಜಾಡಿ
Пікірлер: 2 500
ಯಾರ್ಯಾರು 2024 ರಲ್ಲಿ ಕೇಳುತ್ತಿದ್ದೀರಿ ಲೈಕ್ ಮಾಡಿ
ಲೆಕ್ಕ ಇಟ್ಟಿದ್ದೇನೆ ಇದು 157ನೇ ಬಾರಿ ನಾನು ಕೇಳುತ್ತಿರುವುದು ಪ್ರತಿ ಬಾರಿಯೂ ಹೊಸ ದಾಗಿ ಕೇಳಿದಂತಿದೆ 👌👌👌🙏🙏
@RaghavendraBeejadi
4 жыл бұрын
ನಿಮ್ಮ ಅಭಿಮಾನ ದೊಡ್ಡದು ... ಚಿರ ಋಣಿ ನಾನು..
@vindhyaprasad9180
3 жыл бұрын
ನನಗಂತೂ ಗೊತ್ತೇ ಇಲ್ಲ, ಎಷ್ಟು ಬಾರಿ ಕೇಳಿಯಾಗಿದೆ ಅಂತ……. ಪ್ರತೀಬಾರಿ ಕೇಳಿದಾಗಲೂ ಮನಸ್ಸು ಹಗುರಾಗುತ್ತೆ………
@GAMINGLORDS398
3 жыл бұрын
even i feel same mam..
@Secret.Passion306
3 жыл бұрын
Same here .
@shankarlinggadagi4609
2 жыл бұрын
Super sir nivu
2024 ಆದರೂ ಇನ್ನೂ ಕೇಳಬೇಕು ಅನಿಸುವ ಹಾಡು
ಈ ಹಾಡನ್ನು ಅಶ್ವಥ್ ನಾರಾಯಣ ಅವರ ಕಂಠದಿಂದ ಕೇಳಬೇಕು ಎಂದು ಆಸೆ ಇರುವವರು ಲೈಕ್ ಮಾಡಿ 👍🏻👇❤
ಬರೆಯಬೇಕು ನಿಮ್ಮಂತೆ ಹಾಡು ಬೇಕು ನಿಮ್ಮಂತೆ ಜನರು ಸಾಲಾಗಿ ನಿಂತು ಕೇಳುವಂತೆ ಎಲ್ಲರಿಗೂ ಅಭಿನಂದನೆಗಳು ಸರ್
@rajeevpattar9081
Жыл бұрын
ಸಾಲಾಗಿ ನಿಂತು ಅಲ್ಲ" ಮೈಮರೆತು ಕೇಳುವಂತೆ" ಸೂಕ್ತ ಅನಿಸಲ್ಲವೇ ಸರ್
@prayagkulkarni6194
Жыл бұрын
Waahhhh
@RaviShankar-gr6kc
Жыл бұрын
Woww your lines also amazing
@mahanteshshettar2135
Жыл бұрын
❤
@manjunathkatti4406
Жыл бұрын
Super lines sir
ಅರ್ಥಪೂರ್ಣ ಹಾಡು 👌👌ಯಾರದ್ದೊ ವ್ಯಾಟ್ಸಪ್ ಸ್ಟೆಟಸ್ ನಲ್ಲಿ ಕೆೇಳಿದ ಸಾಲುಗಳು ಕರೆತಂತು ನನ್ನಿಲ್ಲಿಗೆ 😍
@jkcreationskannada1416
2 жыл бұрын
ನಾನೂ ಕೂಡ....
@sandalwoodentertainment8369
2 жыл бұрын
ನಾನೂ ಕೂಡ
@ashag3260
2 жыл бұрын
ಎಂಥ ಸಾಹಿತ್ಯ!!!
@ravikumararsravi4224
2 жыл бұрын
ನನಗೂ ಸಹ ಇಲ್ಲಿಗೆ ಕರೆತಂತು
@rajusraddy8584
2 жыл бұрын
Same bro♥️
ನನ್ನ ಒಂದು ವರ್ಷದ ಮಗು ಮಲಗುವುದು ಇದೆ ಹಾಡಿನಿಂದ... ಕನ್ನಡದ ಅರ್ಥಗರ್ಭಿತ ಹಾಡುಗಳಲ್ಲಿ ಇದೂ ಒಂದು ❤️
@Manjurathna123
Жыл бұрын
Super ❤
@nature2547
10 ай бұрын
ಮಕ್ಕಳಿಂದ ದೂರ ಇಡಿ ಮೊಬೈಲ್ ಅನ್ನು
@nagarajakukke7406
9 ай бұрын
Thumba santhosha kannadigare
@shankarak5491
2 ай бұрын
So sweet🥳
ಇರಬೇಕು ದ್ವನಿ ನಿಮ್ಮಂತೆ ನಲಿಬೇಕೂ ಮನಸು ಚಿಗರೆಯಂತೆ ಕರಗಲಿ ಚಿಂತೆ ಚಿತೆಯಂತೆ ಇರಬೇಕು ಎಲ್ಲರಿಗೂ ಆಸರೆಯಂತೆ 🙏🙏🙏
@komalatallapaka993
11 ай бұрын
👌😇
@javeedjj2101
4 ай бұрын
🎉
ನೊಂದ ಜೀವಕ್ಕೆ ಸಾಂತ್ವನ ಹೇಳುವಂತಿದೆ ಈ ಗೀತೆ...ಗಾಯಕರೆ, ರಚನೆಕಾರರೆ ನಿಮಗಿದೊ ಅನಂತ ಧನ್ಯವಾದಗಳು
@sureshamunikrishnappa8980
2 жыл бұрын
ನಿಜ,,ಸ್ಪೂರ್ತಿದಾಯಕವಾಗಿದೆ ಸೋತರು,, ಮತ್ತೆ ಮತ್ತೆ ಗೆಲ್ಲುವ ಸ್ಪೂರ್ತಿ,,,
@arerarerarer8351
2 жыл бұрын
ನಿಜ
@sowmyasanath5046
2 жыл бұрын
ಹೌದು ಏನೋ ನೆಮ್ಮದಿ ಸಿಗುತ್ತೆ ಸುಮಧುರ ಕಂಠ
@divyanadig1925
2 жыл бұрын
Yestu artha adagide e hadalli ..yenta yede biriv novidru kuda .e haadu kelata idre jeevakke samadhan sigutte ..hadiruv gayakarige nann namaskar ....nimm voice Alli yestu madhuravad bhavane adagide ..tq..
@shanbogramamurthy7090
Жыл бұрын
@@arerarerarer8351 ,,,,,*,,*lzzzzzzzz,sA Ez🎉E,s
ಎಷ್ಟೆಲ್ಲ ಅರ್ಥಪೂರ್ಣ ಕವಿತೆಗಳು ಇಷ್ಟು ಸಮಯ ಸುಪ್ತವಾಗಿಯೇ ಇದ್ದವು. ಈಗ ಕೇಳುವಾಗ ರೋಮಾಂಚನವಾಗುತ್ತದೆ. ಧನ್ಯವಾದಗಳು ನಿಮಗೆ.
@yuvarajkamath7104
3 жыл бұрын
ಅಹುದು ಕವಿವರ್ಯ 🙏
@sush7195
3 жыл бұрын
👍
ಕನ್ನಡ ನೆಲದಲ್ಲಿ ಹುಟ್ಟಿದ ನಾವೆಲ್ಲಾ ಪುಣ್ಯವಂತರು.... ಹೆಚ್.ಎಸ್.ವಿ.ಕವಿಗಳಿಗೆ ನನ್ನ ನಮನಗಳು😘💐
@thrivenisharma8329
Жыл бұрын
ಎಷ್ಟು ಕೇಳಿದರೂ ಮನಸ್ಸಿಗೆ ತೃಪ್ತಿಯೇ ಸಿಗುವುದಿಲ್ಲ,ತುಂಬ ಬೇಜಾರಿದ್ದಾಗ ನಾನು ಕೇಳುವುದು ಇದ ಗೀತೆಯನ್ನು,ಧನ್ಯವಾದ ಬರೆದವರಿಗೆ,ಹಾಡಿದವರಿಗೆ ಅಭಿನಂದನೆಗಳು
ನನ್ನ ಬದುಕಿನ ಭಗವದ್ಗೀತೆ, ಮನಸ್ಸು ಅಲ್ಲೋಲ ಕಲ್ಲೋಲ ವಾದಾಗ ಈ ಗೀತೆ ಆಲಿಸಿದಾಗ ಮನಸು ಶಾಂತಿ ಸಾಗರ, ಕವಿಗಳು , ಗಾಯಕರಿಬ್ಬರಿಗೂ ಅನಂತಆನಂತ ನಮಸ್ಕಾರ ಗಳು 🌹
ಸುಮಧುರವಾಗಿದೆ ರಾಘವೇಂದ್ರ ಬಿಜಾಡಿಯವರ ಗಾಯನ ಮತ್ತು ಸಂಗೀತ. ಹೆಚ್ ಎಸ್ ವಿ ಯವರ ಸಾಹಿತ್ಯ ಅದ್ಭುತ. ಸಮೀರ್ ರವರ ಕೊಳಲ ಮಾಧುರ್ಯ ಅದ್ಭುತ.. 👌👍💐💐💗🙏
@jayalakshmikalakonnavar6022
3 жыл бұрын
1a111
@sush7195
3 жыл бұрын
👌
@sheelaranirani6888
3 жыл бұрын
@@veerendrapatil3005 pp
@sheelaranirani6888
3 жыл бұрын
Super
@sheelaranirani6888
3 жыл бұрын
Good super
ಖಂಡಿತವಾಗಿಯೂ ಈ ಹಾಡನ್ನು ಒಂದು ಸಲ ಕೇಳಿ ಸುಮ್ಮನಿರಲು ಸಾಧ್ಯವೇ ಇಲ್ಲ 👌👌 ಅಧ್ಬುತ ಗಾಯನ..ಅಷ್ಟೇ ಅಧ್ಬುತ ಸಾಹಿತ್ಯ..ಬದುಕಿನ ಅರ್ಥಪೂರ್ಣ ವಾದ ಹಾಡು😍👌🙏🙏🙏
@sureshdevalapur2374
Жыл бұрын
ನಾನಂತೂ ಈ ಅದ್ಭುತ ಗಾಯನಕ್ಕೆ (ಗಾಯನ ಸಿರಿಗೆ) ಮೈಮರೆತು ಮಾರುಹೋಗಿದ್ದೆನೆ ಕೆಳಿದಷ್ಟು ಇನ್ನಷ್ಟು ಕೇಳಬೇಕೆನಿಸುತ್ತಿದೆ ತುಂಬಾದ ಇಂಪಾದ ಗಾಯನ ತಂಪಾದ ತಂಗಾಳಿ ಅಲೆಯಂತೆ ಸೂಸಿ ಬರುತ್ತದೆ. ಈ ಸುಮಧುರ ಸಂಗೀತ.
@venkatshprasanna8588
Жыл бұрын
ಒಳ್ಳೆ ಹಾಡು ಕೇಳಿ ದಿನಕ್ಕೊಮ್ಮೆ
ನಿಜ್ವಾಗ್ಲೂ ಸಮಾಜದ ಬಗ್ಗೆ ಅಪಾರ ಕಾಳಜಿ ಇಟ್ಕೊಂಡು ಕೆಲಸ ಮಾಡೋರಿಗೆ ಈ ಸಾಲುಗಳು ಕಣ್ಣಲ್ಲಿ ನೀರು ತರಿಸದೇ ಇರೋಕೆ ಸಾಧ್ಯವಿಲ್ಲ... 👌🏻🙏🏻
ಅತ್ಯದ್ಭುತ ಸಾಹಿತ್ಯ, ಪ್ರತಿ ದಿನ ಕೇಳುತ್ತೇನೆ ಮನಸ್ಸಿಗೆ ಬೇಸರವಾದಾಗ ಸತತವಾಗಿ ಅರ್ಧ ಗಂಟೆ ಸಾಂಗ್ ಕೇಳುತ್ತೇನೆ ❤❤❤❤❤
ಒಮ್ಮೆ ಕೇಳಿದವರಿಗೆ ಇನ್ನೊಮ್ಮೆ ಕೇಳದೆ ಇರಲಾಗದಂತ ಕೆಲವೇ ಗೀತೆಗಳಲ್ಲಿ ಇದೂ ಒಂದು.
ಈ ಹಾಡು ಬರೆದವರಿಗೆ, ಸಂಗೀತ ಸಂಯೋಜನೆ ಮಾಡಿದವರಿಗೆ, ಹಾಡಿದವರಿಗೆ... ಕೋಟಿ ಧನ್ಯವಾದಗಳು...👌👌👌👌👌🌸🙏🌹🌹
@tobiram1
2 жыл бұрын
Super 🙏🏻🙏🏻🙏🏻
@ashokkiccha4519
2 жыл бұрын
ಬರೆದವರು ನಮ್ಮ ದಾವಣಗೆರೆ ಯ ಹೆಚ್ ಎಸ್ ವೆಂಕಟೇಶ್ ಮೂರ್ತಿ
@mrtitain8488
Жыл бұрын
ವಾವ್ ಸೂಪರ್ 👌🏽
ಇದೊಂದು master piece... 👌 ದಶಮಾನಕ್ಕೆ ಒಂದೇ ಈ ಥರದ ಹಾಡು ಹುಟ್ಟುವುದು.. ಧನ್ಯವಾದಗಳು ಎಲ್ಲರಿಗೂ ಈ ಹಾಡನ್ನು ನಮಗೆ ತಲುಪಿಸಿದ್ದಕ್ಕೆ 🙏
ನೋವಿನಲ್ಲಿ ಇದ್ದ ಮನಸ್ಸು ಈ ಹಾಡು ಕೇಳಿದರೆ ಮನಸ್ಸು ಮುಗಿಲಿನಷ್ಟೇ ಹಗುರವಾಗುತ್ತದೆ.. 🙏
@PraveenKumar-du6yl
Жыл бұрын
Nija...novidda manasu athu athu haguraguthade. E hadu kelidagella kannanchinalli neeru
ಈ ಹಾಡನ್ನು ಕೇಳುವಾಗ ನಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ಯುತ್ತದೆ... ತುಂಬಾ ಅರ್ಧ ಗರ್ಭೀತವಾಗಿದೆ. ಸೂಪರ್
ಕನ್ನಡದ ಪದಗಳು ಮುತ್ತುಗಳಿದಂತೆ ,,ಕನ್ನಡ ನಾಡಿನಲ್ಲಿ ಹುಟ್ಟಿದ ನನ್ನ ಜನ್ಮ ಪುಣ್ಯ 🌹
ಎಷ್ಟೇ ನೋವಿದ್ದರೂ ಈ ಹಾಡು ಕೇಳಿದಾಕ್ಷಣ ಎಲ್ಲವನ್ನು ಮರೆತುಬಿಡಬಹುದು.... ಎಲ್ಲ ನೋವನ್ನು ಮರೆಸುವ ಶಕ್ತಿ ಈ ಹಾಡೊಳಗಡಗಿದೆ🙏
ಈ ಹಾಡು ಕೇಳಿದರೇ ಹಾಗೆ ಕೇಳಬೇಕು ಅನಿಸುತ್ತದೆ ಮತ್ತೆ ಮನಸ್ಸು ಸಮಾಧಾನ ಆಗಿತ್ತದೆ ನನ್ನಾ ಎಲ್ಲ ನೂವು ಮರೆಯುತ್ತದೆ ನಿಮ್ಮ ಧ್ವನಿ ಕೂಳಲೂ ತುಂಬ ಖುಷಿ ಕೊಡುತ್ತ 🙏🙏🙏
"ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ" ಎಂತಹ ಅತ್ಯದ್ಭುತ ಸಾಲುಗಳುಇದನ್ನು ಬರೆದಂತ ನಮ್ಮ ಕವಿಗೆ ಮತ್ತು ಹಾಡಿದವರಿಗೆ ನನ್ನ ಸಾವಿರ ಕೋಟಿ ಧನ್ಯವಾದಗಳು 💐💐💐💐💐💐💐💐💐💐💐💐
@sukanyas5392
6 ай бұрын
❤
@rameshhdr1170
3 ай бұрын
❤
ಆಹಾ ಸಾರ್ಥಕ ಭಾವನೆ ಮೂಡುತ್ತಿದೆ 🙏 ನಿಮ್ಮಂತ ಸಾಧಕರನ್ನ ಪಡೆದ ಕನ್ನಡ ನಾಡಿನ ಕನ್ನಡಿಗರ ಪುಣ್ಯ 💐 ಈ ಗೀತೆಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ನಾವು ಕೃತಜ್ಞರಾಗಿರುತ್ತೇವೆ 🙏 ಜೈ ಕನ್ನಡಾಂಬೆ 💐
@LearnwithBasava523
2 жыл бұрын
ಅದ್ಬುತ ಸಾಹಿತ್ಯ, ಅತ್ಯದ್ಭುತ ಗಾಯನ, ಹೃದಯದ ಒಳಗಿಳಿವ ಸಂಗೀತ. ಧನ್ಯೋಸ್ಮಿ
ಲೆಕ್ಕವಿಲ್ಲದ್ದಷ್ಟು ಭಾರೀ ಕೇಳಿದೆ. ಮತ್ತೇ ಮತ್ತೇ ಕೇಳಬೇಕು ಎಂದು ಪ್ರತಿಸಲವೂ ಅನಿಸುತ್ತದೆ.🙏🙏🙏👌👌💕
ನಾನು ಪದೇ ಪದೇ ಕೇಳುವ ಹಾಡು...
ಈ ಹಾಡು ಕೇಳಿದರೆ ಕನ್ನಡ, ಕನ್ನಡ ಸಾಹಿತ್ಯದ ಬಗ್ಗೆ ಹೆಮ್ಮೆ ಎನಿಸುತ್ತದೆ 🙏🙏, ಎಷ್ಟೊಂದು ಶ್ರೀಮಂತಿಕೆ......
ఈ జన్మ ధన్యం అయింది నాకు ఈ పాట అంత మధురంగా వుంది. పాడినవాలకి నా పాదాభివందనాలు 🙏🙏🙏🙏🙏🙏🙏
@phalakshasl3085
Жыл бұрын
ಲಾವಣ್ಯರವರೆ...ನಿಮಗೆ ತುಂಬು ಹೃದಯದ ಧನ್ಯವಾದಗಳು.ಕವಿತೆಯ ಭಾವನೆಗೆ ಸ್ಪಂದಿಸಿದ್ದಕ್ಕೆ...
@amitkulkarni4479
Жыл бұрын
😊
@nagarajakukke7406
9 ай бұрын
Theluguvalu kannadavalu grateful but me mata super
@shivaswamy6392
7 ай бұрын
Well net meaningful songs will steal our hearts even if they are not understood fully .... Power of music is unlimited.
ಅತ್ಯದ್ಭುತ ಗೀತೆ🙏🙏🙏 ಎಷ್ಟು ಬಾರಿ ಕೇಳಿದರೂ ಹೊಸದೇ, ಸ್ಫೂರ್ತಿದಾಯಕ, ನೆಮ್ಮದಿ ನೀಡುವ ಗಾಯನ... ಸಾವಿರ ಪ್ರಣಾಮಗಳು, ಎಲ್ಲರಿಗೂ 🙏🙏🙏
ಈ ಹಾಡು ಜನರ ಮನಸಿನ ಭಾವನೆಗಳ ಲೋಕದಲಿ ಹಾಡಿಸಿ ಅವರ ಮನಸ್ಥಿತಿಯನ್ನು ಸಮ ಸ್ಥಿತಿಗೆ ತಂದು ಬದುಕು ಇನ್ನೂ ಹಸಿರಾಗಿದೆ ಎಂದು ತಿಳಿಸುವಂತ ಅದ್ಭುತವಾದ ಹಾಡು.
@radhaajay1552
9 ай бұрын
Well said
ಅಹೋರಾತ್ರ ಸರ್ ಬರೆದಿರುವುದು ಹಾಡುಗಳನ್ನ ನೀವು ಹಾಡಿರುವ ಎಲ್ಲ ಹಾಡುಗಳೂ ಅದ್ಬುತ ಸರ್ ನಿಜಕ್ಕೂ
@hmsriguruprakash3093
2 жыл бұрын
ಅಹೋರಾತ್ರ ಸಾರ್ ಅಲ್ಲ....ಎಚ್ ಎಸ್ ವೆಂಕಟೇಶ್ ಮೂರ್ತಿ ಸಾರ್
ಸಾಹಿತ್ಯಮಯವೀ ಬದುಕಿನಂತಿದೆ ಗೀತೆ..ಕಾಣದ ಬ್ರಹ್ಮನೆ ಗೀಚಿದಂತೆ.💖🙏
ಪ್ರತಿದಿನ ನಾನು ಕೇಳುವ ಆನಂದಿಸುವ ಹಾಡುಗಳಲ್ಲಿ ಇದು ಒಂದು ಎಚ್ಎಸ್ವಿ ಯವರು ಅತ್ಯಂತ ಅಮೋಘವಾದ ಸರಿ ಸಾಟಿಯಾಗದ ಸಾಹಿತ್ಯವನ್ನು ಈ ಗೀತೆಯ ರೂಪದಲ್ಲಿ ನೀಡಿರುತ್ತಾರೆ ಹಾಗೆಯೇ ಹಾಡುಗಾರಿಕೆಯು ಕೂಡ ಅತ್ಯುತ್ತಮವಾಗಿದೆ❤
ಆಹಾ.... ಅದ್ಭುತವಾದ ಸಾಹಿತ್ಯ ದಾ ಜೊತೆಗೆ ಅಮೋಘ ವಾದ ಧ್ವನಿ 😍🙏 ಅದೆಷ್ಟು ಅರ್ಥ ಪೂರ್ಣವಾದ ಸಾಹಿತ್ಯ 👏👏
ನೊಂದ ನನ್ನ ಮನಕ್ಕೆ ಈ ಗೀತೆ ತುಂಬಾ ಹೋಲಿಕೆ ಯಾಗುತಿದೆ, ತುಂಬಾ ಧನ್ಯವಾದ
ಡಾ.ಹೆಚ್.ಎಸ್.ವಿ ರವರ ರಚನೆ ನಿಜಕ್ಕೂ ಜೀವನದುದ್ದಕ್ಕೂ ಪ್ರೇರಣೆ ನೀಡುತ್ತದೆ. ಅವರಿಗೆ ನನ್ನ ಅಭಿನಂದನೆಗಳು.
ಈ ಹಾಡು ಕೇಳಿದಾಗೆಲ್ಲಾ ಏನೋ ಮನದಲ್ಲಿ ಶಾಂತಿ, ಹಗುರ, ಸಮಾಧಾನ ಸಿಗುವುದು.🙏👌
ಎಷ್ಟು ಬಾರಿ ಕೇಳಿದ್ದೇನೆ ಎಂದು ಲೆಕ್ಕವಿಡಲು ಸಾದ್ಯವಿಲ್ಲ... ಕಾರಣ ಪ್ರತಿಬಾರಿ ಕೇಳುವಾಗಲೂ ಹೊಸ ಚೈತನ್ಯ ತುಂಬುತ್ತಿದೆ.
ಕಸ್ತೂರಿ ಕನ್ನಡಕ್ಕೆ ಜೀವದುಂಬುವ ಕನ್ನಡದ ಕವಿಗಳಿಗೆ ಶರಣು ಶರಣು,,,,,,. ಅತ್ಯುತ್ತಮ ಸಾಹಿತ್ಯ ಸಂಗೀತ ಹಾಗೂ ಗಾಯನ.
H S ವೆಂಕಟೇಶಮೂರ್ತಿ ಅವರ ಸಾಹಿತ್ಯಕ್ಕೆ ನನ್ನ ನಮನಗಳು... ಒಂದೊಂದು ಶಬ್ದವು ಮುಗಿಲಿನಿಂದ ಬಿದ್ದಂತಿವೆ.. ಅದ್ಬುತ...😍😍
ಸಪ್ತ ಸಾಗರದಾಚೆ ಎಲ್ಲೊ side B effect 😍😍😍
ಕನ್ನಡ ಭಾವಗಿತೆ ಲೋಕಕ್ಕೆ ಅತ್ಯಂತ ಸುಂದರ ಕೊಡುಗೆ.🎉
ನಾನು 5 ತಿಂಗಳಿನಿಂದ ಪ್ರತಿದಿನವೂ ಈ ಹಾಡು ಕೇಳಿದ್ದೇನೆ,ಕೇಳುತ್ತಿದ್ದೇನೆ......ಪ್ರತಿ ಕೇಳುವಿಕೆಯೂ ನವನವೀನ ಭಾವ
ಬಂದೆ ಇಲ್ಲಿಗೆ ಆಕಸ್ಮಿಕವಾಗಿ ಮರುಳಾದೆ ಗೀತೆಯ ಮಾಧುರ್ಯಕ್ಕೆ.
@saggereradhakrishna9904
Жыл бұрын
ಮೊದಲ ಬಾರಿಗೆ ಕೇಳಿದಾಗ ಶಿವಮೊಗ್ಗ ಸುಬ್ಬಣ್ಣನವರು ಹಾಡಿದಂತೆ, ಕೇಳದಂತಿತ್ತು
ಎನೆಂದು ಹೇಳಲಿ ಕವಿ ನಿನ್ನಾ ವರ್ಣನೆಗೆ 🙏❤️🥰
ಸುರಿಯುವ ಮಳೆಯ ಹನಿಗಳನ್ನು ಲೆಕ್ಕ ಇಡಲು ಸಾಧ್ಯವೇ? ಅಷ್ಟು ಬಾರಿ ಕೇಳಿದ್ದೇನೆ ಈ ಸಂಗೀತವನ್ನು. ನನ್ನ ಐದು ವರ್ಷದ ಮೊಮ್ಮಗಳು ಸದಾ ಗುಣ ಕೂ ಗುನುಗುತಿರುತ್ತಾಳೆ ಈ ಹಾಡನ್ನು. ನಮ್ಮ ಮನೆಯ ಭಾರ ಎಲ್ಲರಿಗೂ ಅತ್ಯಂತ ಪ್ರಿಯವಾಗಿದೆ ಈ ಹಾಡು.
ಭಾಷೆಯ ಹಿರಿಮೆ ಹೆಚ್ಚಿಸುವ ಸಾಹಿತ್ಯ...ಸಾಹಿತ್ಯಕ್ಕೆ ನಿಜ ಭಾವ ತುಂಬುವ ಸಂಗೀತ ಗಾಯನ ....ಧನ್ಯೋಸ್ಮಿ.🙏🙏
ಇಂದಿನ ಜಂಜಡದ ಬದುಕಿನ ಮರುಭೂಮಿಯಲ್ಲಿ ಓಯಸಿಸ್ ನಂತೆ ಮೂಡಿ ಬಂದಿರುವ ಅತ್ಯದ್ಭುತ ಸಾಹಿತ್ಯ ಉತ್ಕೃಷ್ಟ ಸ್ವರ ಸಂಯೋಜನೆ ಸುಮಧುರ ಗಾಯನ ಪುನಃ ಪುನಃ ಕೇಳಿದರೂ ಮತ್ತೆ ಮನಸ್ಸನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಸರ್ವರಿಗೂ ಧನ್ಯವಾದಗಳು
ಹೃದಯದ ತರಂಗ ಮೀಟುವ ಸಾಹಿತ್ಯ, ಮತ್ತೆ ಕೋಗಿಲೆಯ ಕಂಠದಿಂದ ಹೊಮ್ಮುವ ಗಾಯನ, ತುಂಬಾ ಚೆನ್ನಾಗಿದೆ.
ಇಂತಾ ಹಾಡುಗಳು ಮನಸನ್ನು ಸಂತೈಸಲು ಆ ಪರಮಾತ್ಮನೇ ಸೃಷ್ಟಿಸುತ್ತನೇ..ಮನಸ್ಸು ಭಾವನಲೋಕದಲ್ಲಿ ತಲ್ಲಿನವಾಗಿ ಬದುಕು ಸಾರ್ಥಕ ಎನಿಸುವುದು...❤❤.
ಮತ್ತೆ ಮತ್ತೆ ಕೇಳಬೇಕು ಎನಿಸುವ ಗೀತೆ..... ಪ್ರತಿ ಬಾರಿ ಕೇಳಿದಾಗಲೂ ಅದೇ ತನ್ಮಯ ಭಾವ.... ರಾಘಣ್ಣನ ಧ್ವನಿ ಅದ್ಭುತ.....
ಈ ಹಾಡು ಕೇಳ್ತಾ ಇದ್ರೆ ಒಂತರ ಮನಸ್ಸಿಗೆ ನೆಮ್ಮದಿ ಸಿಗ್ತಾ ಇದೆ ಸೂಪರ್ ಸರ್ ಮತ್ತೆ ಮತ್ತೆ ಕೇಳ್ಬೇಕು ಈ ಹಾಡನ್ನು annisutte
ಬಾಳಿಗೆ ಧನ್ಯತಾ ಭಾವ ಮೂಡಿಸುವ ಹಾಡು. ಯಾವ ವಿಷಯವಾಗಲಿ, ಒಳ್ಳೆಯ ಇಚ್ಛಾ ಶಕ್ತಿ ಇಟ್ಟು ನೋಡಿದರೆ ಅದು ಚೆನ್ನಾಗಿ ಕಾಣುತ್ತದೆ ಮತ್ತು ಬದುಕಿಗೆ ಸ್ಪೂರ್ತಿ ತುಂಬುತ್ತದೆ.
ಅಮೋಘ ರತ್ನಮಾಲೆಯಂತಹ ಹಾಡು ಹಾಡಿನಲ್ಲಿ ಬರುವ ಪ್ರತಿಯೊಂದು ಪದವೂ ಮೈ ಝುಮ್ಮೆನಿಸುವಂತಹದು ಗಾಯನವಂತೂ🙏
ಬಹಳ ಬೇಸರವಾದಾಗ ಈ ಹಾಡು ಕೇಳಿ Refresh ಆಗ್ತೇನೆ 😍😍😍
@RaghavendraBeejadi
4 жыл бұрын
ನಾನು ಕೂಡ ಹಾಗೆಯೆ ಸರ್... ಬೇಸರವಾದಾಗ ಗುನುಗಿಕೊಳ್ತೇನೆ ಈ ಹಾಡು
@lohithk7320
3 жыл бұрын
Including me also..
@chandrugajarkot2541
3 жыл бұрын
@@RaghavendraBeejadi ಸರ್ ನಾನು ದಿನಾಲೂ ಹಾಡು ಕೇಳಿನೆ ಮಲಗೋದು..
@josephdsouzakundapura5561
2 жыл бұрын
ಸತ್ಯವಾದ ಮಾತು...
@bheemappachoutagi7250
2 жыл бұрын
ಹಾಗೆ ಬಾಳಿಸು ಗುರುವೇ ಕರುಣೆ ಇಟ್ಟು
ಜೀವನಕ್ಕೆ ಒಂದು ಪಾಠ ಈ ಹಾಡು...
ಎಚ್ ಎಸ್ ವಿ ಅವರ ಸಾಹಿತ್ಯ , ನಿಮ್ಮ ಧ್ವನಿ ಮತ್ತು ಸಂಗೀತದ ಮೂಲಕ ನಮ್ಮೆಲ್ಲರ ಹೃದಯದ ಬಾಗಿಲು ತೆರೆಯುತ್ತದೆ, ತೆರೆಯುವಾಗ ಕಣ್ಣು ಒದ್ದೆಯಾಗುತ್ತದೆ. 🙏🌺
ವಾವ್ ಅಣ್ಣಾ...! ವಜ್ರದ ಕಂಠದಿಂದ ಮುತ್ತಿನ ಸುರಿಮಳೆ ಸುರಿದಂತೆ ಇದೆ... ಅದ್ಭುತ ಗಾಯನ 👌♥️
@bkmeenakshi2779
2 жыл бұрын
ನಿಜ....ಹಾಗೇ ಅನಿಸುತ್ತದೆ.
@arerarerarer8351
2 жыл бұрын
👌ಹೋಲಿಕೆ
ಅತಿ ಸುಂದರವಾದ ರಚನೆ, ರಚಿಸಿದವರಿಗೆ, ಹಾಡಿದವರಿಗೆ, ಸಂಗೀತ ಸಂಯೋಜಕರಿಗೆ ಕೋಟಿ ಕೋಟಿ ಧನ್ಯವಾದಗಳು 🙏🙏🙏
ಸುಮಧುರ ಸಂಗೀತ ಸುಮಧುರ ಸಾಹಿತ್ಯ ಅರ್ಥ ಪೂರ್ಣವಾದ ಮನಸು ಮೆಚ್ಚುಗೆ ಇರುವ ಹಾಡು....
ಮನಮುಟ್ಟುವ ಸಾಲುಗಳು ಮನ ತಟ್ಟುವ ಸಂಗೀತ ಕಣ್ಣಿನಲ್ಲಿ ನೀರು ತರುವುದು ನಿಜಸಹಜ🥺🙏
ನನ್ನ ಸಾವಿರ ಚಿಂತನೆಯನ್ನು ದೂರ ಮಾಡಿದ ಕವಿತೆ... ನನ್ನಲ್ಲಿ ಚೈತನ್ಯಯನ್ನುಂಟು ಮಾಡಿದ ಕವಿತೆ..
ಸೂಪರ್ ಸರ್
ಅದ್ಭುತವಾದ ಸಂಗೀತ, ಸಾಹಿತ್ಯ ಹಾಗೂ ಗಾಯನಕ್ಕಾಗಿ ಧನ್ಯವಾದಗಳು
ಕೇಳಿದ ಮೊದಲಬಾರಿಗೆ ಇದರರ್ಥ ಮನ ಮುಟ್ಟಿತು... ಎಂತಹ ಸಾಹಿತ್ಯ ಇಂತಹ ಗಾಯನ 👏👏
ಅನಂತ ನಮನಗಳು - ಸಾಹಿತ್ಯಕ್ಕೆ, ಸಂಗೀತ ಸಂಯೋಜನೆಗೆ ಮತ್ತು ಅತ್ಯುತ್ತಮ ಹಾಡುಗಾರಿಕೆಗೆ.
🙏😑😑😑🙏 ಬಾಳಿಸು ಗುರುವೇ ಕರುಣೆ ಇಟ್ಟು
ಅದ್ಬುತ ರಚನೆ ಕಣ್ ಮುಚ್ಚಿ ಆಲಿಸುತಿದ್ದರೆ ಸಾವಿರ ಚಿಂತೆ ಮರೆತು ಹೋಗುತ್ತದೆ ಇಂತರ ಸುಂದರ ಗೀತೆ ಪಡೆದ ನಾವೇ ಧನ್ಯರು
ಹೃದಯ ಹಗುರವಾದ ಭಾವನೆ..
ಅಧ್ಬುತವಾದ ಹಾಡು ಮನಸ್ಸು ಹಗುರಾಯಿತು,ಹೃದಯ ಕುಣಿಯಿತು,ಧನ್ಯವಾದಗಳು ಸಂಗೀತ ಬಳಗಕ್ಕೆ💐💐💐
ಅದ್ಭುತ ಆನಂದ ... ಎಲ್ಲವೂ ನಮ್ಮ ಕನ್ನಡ ಎಷ್ಟು ಚಂದ.!!!
ಅದ್ಬುತ ಸಾಹಿತ್ಯ ,ಅದ್ಬುತವಾದ ಸಂಯೋಜನೆ,ಮನಸ್ಸಿನ ದುಗುಡ ದೂರವಾಗುವ ಅನುಭವ
ಅತ್ಯದ್ಭುತವಾದ ಸಾಹಿತ್ಯ ಹಾಗೂ ಗಾಯನ. ಮತ್ತೆ ಮತ್ತೆ ಕೇಳುವಂತಾಗಿದೆ
ಇಂಥ ಪ್ರತಿಭೆಗಳು ಮತ್ತೆ ಮತ್ತೆ ಹುಟ್ಟಿ ಕನ್ನಡವನ್ನು ಕನ್ನಡಿಗ ರನ್ನು ಶ್ರೀಮಂತ ಗೊಳಿಸಲು ಗುರುವಿನಲ್ಲಿ ಮನವಿ 🙏🙏🙏🙏🙏
ಮಳೆ ಸುರಿಸಿ ಹಗುರದ ಮುಗಿಲಿನಂತೆ, ನನ್ನ ಮನಸು ಹಗುರಗುತ್ತದೆ, ಈ ಹಾಡು ಕೇಳಿದಾಗ ಈ ಹಾಡನ್ನು ನಾನು ಕಮ್ಮಿ ಕೇಳಿಲ್ಲ ಲೆಕ್ಕವಿಲ್ಲ ದೋಷ್ಟು ಸಲ 🌹🙏🙏🙏
ಹಾಡು ಮನಸಿನ ಭಾರ ಕಮ್ಮಿ ಮಾಡುತ್ತದೆ ಪ್ರತಿ ಸಾಲು ಅರ್ಥ ಗರ್ಭಿತ 💐💐🙏🙏
ಮನಸ್ಸು ರಿಲ್ಯಾಕ್ಸ್ ಆಯ್ತು.. ಮೊದಲ ಭಾರಿ ಈ ಹಾಡು ಕೇಳುತ್ತಿದ್ದೇನೆ... ಸಂಗೀತ ಸಂಯೋಜನೆ, ಸಾಹಿತ್ಯ ಅದ್ಬುತ..🙏🙏🙏
@satishreddy5115
2 жыл бұрын
Dvd
ಸಾವಿರ ಶರಣು 🙏🏻🙏🏻🙏🏻🙏🏻🙏🏻🙏🏻 ಕಣ್ಮುಚ್ಚಿ ಕೇಳುತ್ತಿದ್ದರೆ ನಾವೇ ನೀಲಿಯಾಗಸದಲ್ಲೋ ಸಾಗರದಲ್ಲೋ ತೇಲಿದಂತೆ.... ಎಲ್ಲಾ ಭಾವ ಬಂಧನಗಳಿಂದ ಮುಕ್ತವಾದಂತೆ ಭಾಸವಾಗುತ್ತೆ...
@basammasomashekhar879
Жыл бұрын
Tumba channagede hadu
ಯಾರದೋ ಸ್ಟೇಟಸ್ ನನ್ನನ್ನು ಇಲ್ಲಿಗೆ ಕರೆ ತಂದಿತು ಮತ್ತೆ ಮತ್ತೆ ಕೇಳುವಂತೆ ಮಾಡಿದೆ.
ನನಗೆ ಇದನ್ನು ಕೇಳಿದಷ್ಟು ಮನಸಿಗೆ ಸಮಾಧಾನ. ದಿನಕ್ಕೆ ಒಂದು ಬಾರಿ ಈಗಲೂ ಕೇಳ್ತೀನಿ. 👏👏
ಈ ಹಾಡು ಕೇಳಿದ ಪ್ರತಿ ಸಲವೂ ಕಣ್ಣು ತೇವವಾಗುತ್ತವೆ ನನ್ನನ್ನು ತುಂಬಾ ಭಾವಕಳನ್ನಾಗಿ ಮಾಡುತ್ತದೆ. ತುಂಬಾ ಚಿಂತನೆಗೆ ಹಚ್ಚುತ್ತದೆ. ಇಂತಹ ಅದ್ಭುತ ಸಾಹಿತ್ಯಕ್ಕೆ ನಾನು ಅಭಾರಿ....
@manjuuppin6859
2 ай бұрын
Me Too
ಇದು ಪಠ್ಯದ ಭಾಗವಾಗಬೇಕು, ಅರ್ಥಗರ್ಭಿತ ಮತ್ತು ನಿಸ್ವಾರ್ಥತೆಯನ್ನು ಎದೆಯಲ್ಲಿ ಬಿತ್ತುವಂತಿವೆ ಸಾಲುಗಳು
ಎಷ್ಟ ಸರ್ತಿ ಕೇಳಿದ್ರು ಮತ್ತೆ ಕೇಳ್ಬೇಕು ಅನ್ಸುತ್ತೆ ಸರ್. ಸಾಹಿತ್ಯ ಅಹ HSV ಸರ್ ಅವರಿಗೆ ನಮನ ಹಾಗೂ ನಿಮ್ಮ ಸಂಗೀತ ಗಾಯನ ಅತೀ ಅದ್ಭುತ ಸರ್. ಬೇಗ ೧೦ ಮಿಲಿಯನ್ ಆಗಲಿ ಎಂದು ಆಶಿಸುವೆ.
ಬಹಳ ಅದ್ಭುತವಾದ ಹಾಡು, ಮನಸ್ಸು ತುಂಬಾ ಹಗುರವಾಗುತ್ತದೆ 👌🏻
ನೀರಲ್ಲಿ ಮಂಜು ಕರಗಿದಂತೆ ಈ ಸಾಹಿತ್ಯದಲ್ಲಿ ಮನಸು ಕರಗಿತು.....🙏
@javeedjj2101
2 жыл бұрын
💞💞
ಈ ಹಾಡನ್ನು ಮತ್ತೆಮತ್ತೆ ಕೇಳಬೇಕು ಅಂತ ಯೂಟ್ಯೂಬ್ ನಲ್ಲಿ ಹುಡುಕುತ್ತಿದ್ದೆ ಸರ್. ಸಿಕ್ಕಿರಲಿಲ್ಲ. ಯಾವಾಗಲೂ ಪೇಸ್ ಬುಕ್ ನಲ್ಲಿ ಕೇಳುತ್ತಿದ್ದೆ. ಅದೆಷ್ಟೋ ಸರಿ ಕೇಳಿರುವೇನೊ ನನಗೆ ಲೆಕ್ಕ ಸಿಗುತ್ತಿಲ್ಲ. ಅಂತು ಇವತ್ತು ಶಿವರಾತ್ರಿ ಸಾರ್ಥಕವಾಯ್ತು. ಮತ್ತೆ ನಿಮ್ಮ ದನಿಯಲ್ಲಿ ಕೇಳುವ ಅವಕಾಶ ಒದಗಿಸಿದ ಆ ಶಿವ. ಕವಿಗಳಿಗೆ, ಗಾಯಕರಿಗೆ ನನ್ನ ನೂರೊಂದು ಪ್ರಣಾಮಗಳು. 🙏🙏
ಒಂದೊಂದು ಪದಗಳು ಸಹ ಮುತ್ತಿನಂತಹ ಜೋಡಣೆ... ಅರ್ಥಪೂರ್ಣವಾದ ಗೀತೆ..❤
ಭಗವಂತನ ರೂಪವೇ ಈ ಗೀತೆಯನ್ನು ರಚಿಸಿ ಹಾಡಿರುವ ಮಾಹಾನಿಯರು.ಅವರಿಗೆ.ಸತಕೋಟಿ.ನಮನಗಳು❤❤
ಇಷ್ಟು ದಿವಸ ಎಲ್ಲಿ ಕಳೆದು ಹೋಗಿದೆ ನಾನು? ಇಂಥ ಅದ್ಭುತ ಗೀತ ಸಾಹಿತ್ಯ ಇಲ್ಲದೆ.
ಪ್ರಕೃತಿಯ ಕೊಡುವಿಕೆಯ ಸಾಮ್ಯತೆಯನ್ನು ನಿತ್ಯ ಜೀವದ ಭಾವವಾಗಿಸಿದ ಕವಿಗೆ ಸುಶ್ರಾವ್ಯವಾಗಿ ಸಂಗೀತವನ್ನು ಉಣಬಡಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು.
@ramakantbhat193
2 жыл бұрын
It remindes me of Cardinal Newman's ' Lead Kindly Life' translated to Kannada ' Karunalu Ba Belake-------'
ಅರ್ಥಗರ್ಭಿತ ಸಾಹಿತ್ಯ . ಮನಸಿಗೆ ಶಾಂತಿ ಉಂಟು ಮಾಡುವ ಗಾಯನ. ಸಾಗರದಲ್ಲಿ ಒಮ್ಮೆ ಮಕ್ಕಳ ಕಲೋತ್ಸವ ಸಮಾರೋಪ ಸಮಾರಂಭದಲ್ಲಿ ನಿಮ್ಮ ಪ್ರಾರ್ಥನೆ ಅದ್ಭುತ.ಆಗಿಂದ ನಿಮ್ಮ ಅಭಿಮಾನಿ. 🙏
ಮಳೆ ಸುರಿಸಿ ಅಗುರಾದ ಮುಗಿಲಿನಂತೆ. ಎಂತಹ ಅದ್ಭುತವಾದ ಸಾಲುಗಳು ಮತ್ತೆ ಮತ್ತೆ ಕೇಳಬೇಕೆ ಎನ್ನುವ ಆಸೆ, 👌🙏.
ತುಂಬಾ ಸುಂದರವಾದ ಗೀತೆ ಮತ್ತು ಗಾಯನ,👌👌
ಎಚ್ಚಸ್ವಿ ರವರಿಗೆ ಅನಂತ ನಮಸ್ಕಾರಗಳು ರಾಘವೇಂದ್ರ ರ ಅದ್ಭುತ ಗಾಯನ ಅದ್ಬುತ ಸಂಗೀತಗಾರರ ಕೂಡು ಪ್ರಯತ್ನ.
ಬರೆದ ಕವಿಗಳಿಗೂ ಹಾಡಿದ ಗಾಯಕರಿಗೂ ಅನಂತ ಶರಣು ಶರಣಾರ್ಥಿಗಳು 🙏🙏
ನೆನ್ನೆ ರಾತ್ರಿ ಮೊದಲ ಬಾರಿಗೆ ಈ ಹಾಡು ಕೇಳಿದೆ. ಆಗಿನಿಂದ ಕಡಿಮೆ ಅಂದರೂ ಬಹುಶಃ ಒಂದು 15 ಬಾರಿಯಾದರೂ ಕೇಳಿರಬಹುದು .. ಈ ಒಂದೇ ಹಾಡು ಸಾಕಾಯಿತು ಹೆಚ್ ಎಸ್ ವೆಂಕಟೇಶ ಮೂರ್ತಿಯವರ ಅಭಿಮಾನಿಯಾಗಲು. ಅವರ 'ಲೋಕದ ಕಣ್ಣಿಗೆ ರಾಧೆಯು ಕೂಡ ' ಹಾಡನ್ನು ಮೊದಲು ಗುನುಗುತ್ತಿದ್ದೆ ಆದರೆ ಈ ಹಾಡು ನನ್ನನ್ನು ಮರುಳು ಮಾಡಿತು. ❤️❤️
ಅಧ್ಭುತ ಸಾಹಿತ್ಯ ಅದ್ಭುತ ಸಂಗೀತ
ಮತ್ತೆ ಮತ್ತೆ ಕೇಳುತ್ತಾನೆ ಇರಬೇಕು ಎನ್ನುವಂತಹ ಹಾಡು